Sunday, August 10, 2014

"ರಕ್ಷಾ ಬಂಧನ"




                       ಸೋದರ –ಸೋದರಿಯರ ಬಾಂದವ್ಯದ ಪ್ರತೀಕಕ್ಕೆ ರಕ್ಷೆಯ ನೂಲನ್ನು ಕಟ್ಟಿ, ಜವಾಬ್ದಾರಿಯನ್ನು ಇನ್ನಷ್ಟು ಬಿಗಿಗೊಳಿಸಿ ತಮ್ಮ ಪ್ರೀತಿಯ ಸಂಬಂಧದ ಮೆಲಕನ್ನು ನನಸಿನ ಲೋಕದಲ್ಲಿಟ್ಟು ಆರಾಧಿಸುವ  ಸವಿ ಸಮಯ ಈ  “ರಕ್ಷಾ ಬಂಧನ.
             ಈ ದಿನದ ಶೋಭೆಗೆ ನಿದರ್ಶನಗಳು ಹಲವಾರು, ಆ ಸಾಲಿನಲ್ಲಿ ಸದಾ ಮೆರಗುವ ಸವಿ ಕಾಣಿಕೆಯ ನೆನಹು ಇಲ್ಲಿದೆ. ಅಂದು ಚಿತ್ತೋರ್ ನ ರಾಣಿ ಕರ್ಣಾವತಿ ಒಬ್ಬಾಕೆ ವಿಧವೆ. ತನ್ನ ಅಸಹಾಯಕ ಸ್ಥಿತಿ ಅರಿತ ಗುಜರಾತಿನ ಸುಲ್ತಾನ ಬಹಾದ್ದೂರ್ ಶಾಹ್ ಆಕ್ರಮಣದ ರಣಕಹಳೆಯಿಂದ ಬಂಧಿಸಿದ. ಗುಪ್ತಚಾರರ ಮೂಲಕ ಸುದ್ದಿ ತಿಳಿದ ರಾಣಿ ಮೊಘಲ್ ನ ರಾಜ ಹುಮಾಯನ್ ಗೆ ‘ರಕ್ಷೆ’ಯ ನೂಲನ್ನು ಕಳುಹಿಸಿ ಸಹಾಯಸ್ತ  ಬೇಡಿದಳು.ಆತ  ಧರ್ಮ,ಜಾತಿಯ ಮರೆತು  ತನ್ನ ಸೇನಾ ತುಕಡಿಯನ್ನು ಕರೆದುಕೊಂಡು ‘ರಕ್ಷೆ’ಯ ನೂಲಿಗೆ ಗೌರವ ಕೊಟ್ಟು ಮೆರೆದ. ಆದರೆ ವಿಧಿಯ ವಿಪರ್ಯಾಸ  ಅವಳ ಬದುಕಿಗೆ ತೆರೆಕಾಣಿಸಿತು. ಆದರು ಜಾತಿ,ಧರ್ಮಗಳ ಭೇದವೆಣಿಸದೆ ಸಹಾಯಸ್ತ ನಿಡುವಹಾಗೆ ದಾರಿ ತೋರಿದ ಆ ಹೆಮ್ಮೆಯ ಗರಿ, ಈ ‘ರಕ್ಷೆ’ಯ ನೂಲು.
              ಅಂದು ಕೈ ತುಂಬಾ ರಾಕಿ ಕಟ್ಟಿಸಿಕೊಳ್ಳುವ ಬಯಕೆಯಲ್ಲಿ “ರಕ್ಷಾ ಬಂಧನ“ದ ಗೌಜು, ಅದರ ದ್ವನಿಯ ಅರಿವೇ ಮನದಾಳದಲ್ಲಿ ಮೂಡದಿದ್ದರು ಶೋಕಿಯ ನೆಪದಲ್ಲಿ ನಮ್ಮೆಲ್ಲರ ನರ್ತನೆ. ಅರಿವು ತಲೆಯೆತ್ತಿ ನಿಂತು ಎಲ್ಲೆಡೆ ಹರಿಯುವ ಈ ವ್ಯಸನ, ಇಂದಿನ  ಬೆತ್ತಲೆಯ ಪ್ರಪಂಚದ ಒಂದು ಇಣುಕು ನೋಟಗಳು ಮೈ ರೋಮಾಂಚನಕಾರಿ. ಈ ನರ್ತನೆಯ ವರ್ತನಕೆ, ಪರಿವರ್ತನೆಯ ಶೃಂಗಾರದ ಬಯಕೆಯಲ್ಲಿ ಈ ಸಮಯದ ಸಿಹಿ ಸವಿಯೋಣ ಬನ್ನಿ.         
                    
                        ಎಲ್ಲಾ ಸಹೃದಯೀ ಓದುಗರಿಗೆ  “ರಕ್ಷಾ ಬಂಧನ“ದ ಶುಭ ಕಾಮನೆಗಳು .

              

No comments:

Post a Comment