Saturday, May 2, 2015

ತಾಯಂದಿರ ದಿನಾಚರಣೆಗೆ ಎಐಟಿಯಲ್ಲಿ “ರೆಮೋಸ್-ಚಿಕ್ಕಮಗಳೂರು”

     ಓದಿನ ಜೊತೆ ಸೇವೆಯನ್ನು ಗುರಿಯಾಗಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ “ರೆಮೋಸ್-ಚಿಕ್ಕಮಗಳೂರು” ವಿದ್ಯಾರ್ಥಿ ಬಳಗವು ಮೇ 10ರ “ಅಮ್ಮಂದಿರ ದಿನಾಚರಣೆಯ” ಹಿನ್ನಲೆಯಲ್ಲಿ ಪ್ರಥಮ ಬಾರಿಗೆ  ತಮ್ಮ ಕಾಲೇಜು, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
      ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ರವರು ಕುಂಚ ಹಿಡಿದು ಉರಿಯುವ ಜ್ಯೋತಿಯನ್ನು  ಸಾಂಕೇತಿಕವಾಗಿ ಬಿಡಿಸಿ ಉದ್ಘಾಟಿಸಿ, ನಂತರ ಮಾತಾನಾಡಿ  ತಾಯೀ ಪ್ರತ್ಯಕ್ಷ ದೇವತೆ, ತ್ಯಾಗದ ಗಂಧಕುಸುಮ. ಪ್ರೀತಿ, ಮಮತೆಯ  ಒಡಲು.  ಆ ಮಾತೆಯನ್ನು ಗೌರವಿಸುವುದು, ಆರಾಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿ, ಸ್ಪರ್ಧಾಳುಗಳಿಗೆ ಶುಭಕಾಮನೆಯನ್ನು ತಿಳಿಸಿದರು.
    “ತಾಯಿಯ ಮಮತೆ” ಎಂಬ ವಿಷಯದ ಕುರಿತು ಚಿತ್ರಕಲೆಯು, “ವಿಭಿನ್ನ ನೋಟದಲ್ಲಿ  ಕಾಲೇಜು” ಎಂಬುದು ಛಾಯಾಗ್ರಹಣದ ವಿಷಯ. ಅಮ್ಮನ ಪ್ರೀತಿಯ ಸವಿನೆನಪುಗಳಿಗೆ  ಕುಂಚದಿಂದ ಬಣ್ಣಹಚ್ಚುವ ಕಾಯಕದಲ್ಲಿ ಮೂಳುಗಿದ ಗುಂಪು ಒಂದೆಡೆಯಾದರೆ, ಕ್ಯಾಮರ ಕಣ್ಣಿಂದ ತನ್ನ ಕಾಲೇಜನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಕಲ್ಪನೆಯಲ್ಲಿದ್ದ ವಿದ್ಯಾರ್ಥಿಗಳ  ಸಮೂಹ ಇನ್ನೊಂದೆಡೆ ತನ್ನದೇಯಾದ ಲೋಕದಲ್ಲಿ ಬೆರೆತು,ಅರ್ಥಪೂರ್ಣ ದಿನಾಚರಣೆಗೆ ನಾಂದಿಬರೆದರು.



 ಸ್ಪರ್ಧೆಯಲ್ಲಿ  ವಿಜೇತರಿಗೆ  ಎಐಟಿ ಕಾಲೆಜಿನ “ಚುಂಚನ” ಕಾರ್ಯಕ್ರಮದಲ್ಲಿ ಬಹುಮಾನ  ನೀಡಲಾಯಿತು. ಬಹುಮಾನ ಮತ್ತು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ISRASE ಮತ್ತು “ನಮ್ಮ ಚಿಕ್ಕಮಗಳೂರು” ಸಂಸ್ಥೆಗಳು ನಿಭಾಯಿಸಿದವು. ಕಾರ್ಯಕ್ರಮದಲ್ಲಿ “ರೆಮೋಸ್-ಚಿಕ್ಕಮಗಳೂರು” ಸಮಾಜಸ್ನೇಹಿ ವಿದ್ಯಾರ್ಥಿ ಬಳಗದ  ಸರ್ವ ಸದಸ್ಯರು, ಕಾಲೇಜಿನ ಎಲ್ಲ ಪ್ರಾಚಾರ್ಯರು, ಪ್ರಾಯೋಜಕರು ಈ ಅರ್ಥಪೂರ್ಣ  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
   " ಹೆಮ್ಮೆಯ   ಪ್ರಾಯೋಜಕರು"
      

No comments:

Post a Comment