Tuesday, April 7, 2015

ಸೀತಳಯ್ಯನಗಿರಿಯಲ್ಲಿ “ಪ್ಲಾಸ್ಟಿಕ್ ಹಟಾವೋ ಆಂದೋಲನ”ಕ್ಕೆ ಹಸಿರು ನಿಶಾನೆ


ಹುಚ್ಚೆದ್ದು ಹಸಿಗೊಂಡು, ರುದ್ರತಾಂಡವಕ್ಕೆಬೆನ್ನೆಲುಬು
ಗಳಾದ ವಿಕ್ರತ ಮನೋಭಾವಿ ಸ್ನೇಹಿತರೇ,

                               ಪರಿಸರ ನಿಮ್ಮ  ಪಿತ್ರಾರ್ಜಿತ ಸ್ವತ್ತಲ್ಲ. ನಮಗೂ ಬಾಳಲು ಬಿಡಿ. ಬದುಕಲು ಅವಕಾಶ ನೀಡಿ...


      “ರೆಮೋಸ್ ಚಿಕ್ಕಮಗಳೂರು ಮತ್ತು “ಮೈಟೋಸಿಸ್”(Mytosys)  ಸಂಸ್ಥೆಗಳ  ಜಂಟಿ ನೇತ್ರತ್ವದಲ್ಲಿ ಚಿಕ್ಕಮಗಳೂರಿನ ಪ್ರಸಿದ್ದ ಪ್ರೇಕ್ಷಣೀಯ ಸ್ಥಳ ಸೀತಳಯ್ಯನಗಿರಿಯಲ್ಲಿ, ಗಿರಿಯನ್ನು ಆಕ್ರಮಿಸಿದ ಪ್ಲಾಸ್ಟಿಕ್ ,ಬಾಟಲಿ ಇನ್ನಿತರ ಕಸಗಳನ್ನು  ಸ್ವಚ್ಛಗೊಳಿಸಿ, ಪರಿಸರವನ್ನು ಉಚಿತಪಡಿಸಿ, ಪ್ರವಾಸಿಗರಿಗೆ ಸಮಯೋಚಿತ ಜಾಗ್ರತಿಮೂಡಿಸಿ,  ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನುಡಿ ಬರೆದ ಚಿಕ್ಕಮಗಳೂರಿನ ಯುವ ಸಮಾಜಸ್ನೇಹಿ ಬಳಗ.        

 ಪರಿಸರದ ಸೌಂದರ್ಯ ಹಾಳುಮಾಡುವುದು ಸುಲಭ, ಮತ್ತೆ ಶುಭ್ರತೆಯ ಹಾದಿಗೆ ತರುವುದು ತಾಳ್ಮೆಯ ಮಾತಲ್ಲ, ನೀವು ತಂದ ಕಸಕ್ಕೆ ನೀವೇ ಜವಾಬ್ದಾರಿವಹಿಸಿ, ಅದರ ವಿಲೇವಾರಿ ಕ್ರಮಗೊಂಡು. ಭವಿಷ್ಯದಲ್ಲಿ
ಬರುವ ಸಹಸ್ರಾರು ಪ್ರವಾಸಿಗರಿಗೆ ಈ  ಪ್ರೇಕ್ಷಣೀಯ ಸ್ಥಳದ ಸೊಬಗನ್ನು ನೋಡುವ ಭಾಗ್ಯ ಕಲ್ಪಿಸಿ ಎಂದು ಶ್ರಮದಾನದ ಕೈಂಕರ್ಯಕ್ಕೆ ಚಾಲನೆ ನೀಡಿದ ಶ್ರೀಯುತ ವಿವೇಕಾನಂದ ಸರ್  ಹಾಗು ಶ್ರೀಯುತ ಸಂತೋಷ್ ಕುಮಾರ್ ಸರ್ ರವರು ಜನರಲ್ಲಿ ಕಳಕಳಿಯಿಂದ  ವಿನಂತಿಸಿಕೊಂಡರು.
        

           ಕಾರ್ಯಕ್ರಮದಲ್ಲಿ  “ಮೈಟೋಸಿಸ್”(Mytosys)ನ ಸಂಸ್ಥಾಪಕರಾದ ಶ್ರೀನಿಧಿ ಭಟ್ ಮತ್ತು ಪ್ರಜ್ವಲ್ ಎಂ.ಆರ್ ಹಾಗು “ರೆಮೋಸ್ ಚಿಕ್ಕಮಗಳೂರು” ವಿದ್ಯಾರ್ಥಿ ಬಳಗದ ಸಂಸ್ಥಾಪಕ ನಿತೀಶ್ ಮಯ್ಯ  ಮತ್ತು  ಬಳಗದ ಸದಸ್ಯರು ಪ್ರಜ್ವಲ್ ಎಸ್.ವಿ, ಪೂರ್ಣಚಂದ್ರ, ಪ್ರವೀಣ್ ಹೆಚ್.ಟಿ, ಪ್ರಜ್ವಲ್ ಸಿ.ಆರ್, ದರ್ಶನ್  ಹಾಗು ಅವಿನಾಶ್ ರಾವ್, ಸಿ.ಎ ವಿದ್ಯಾರ್ಥಿ ಗಿರಿಯಲ್ಲಿನ ಪ್ಲಾಸ್ಟಿಕ್ ವಿಲೇವಾರಿಗೆ ಸಕ್ರಿಯವಾಗಿ ಭಾಗವಹಿಸಿ ಚಿಕ್ಕಮಗಳೂರಿನ ಸ್ವಚ್ಛ ಭಾರತ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.


No comments:

Post a Comment