Wednesday, September 10, 2014

"ಬಂಡೆಗೆ ಬಂಡಾಯದ ಸವಾಲು"


     ಬಂಡಾಯ,ಮುಷ್ಕರ, ಬಂದ್  ದಿನೆದಿನೆ ತಲೆಯೇತ್ತುತ್ತಿವೆಯೇ ಹೊರತು "ಬಂಡೆ"ಯಂತಿಹ ಈ ಸರ್ಕಾರದಿಂದ ಪ್ರಯೋಜನದ ಪ್ರತ್ಯುತ್ತರ ದೂರದ ಮಾತಾಗಿದೆ. ಕಳೆದ ೨ ವರ್ಷದಿಂದ ಅರ್ಥವಿಲ್ಲದ ಹಲವು ಬಂದ್ ಎಂಬ ಬಂಡಾಯ  ಕತ್ತಲಲ್ಲೂ ತಲೆಯೆತ್ತಿ ಮೆರೆಯುತ್ತಿದೆ. ಇನ್ನು ಕೆಲವು ಅವಶ್ಯಕ ಬೇಡಿಕೆಗಳ ಒತ್ತಾಯ, ಸರ್ಕಾರದ ಕಿವಿ ಮೇಲೆ ಬಿದ್ದಿದೆಯೋ ಇಲ್ಲವೋ???

          ಇವೆಲ್ಲಾ ನನ್ನ ಮಾತಲ್ಲಾ.. ಬಂಡೆಗೆ ತಲೆಗುದ್ದಿಸಿಕೊಂಡವರ ನಾಡಿಮಿಡಿತ ಪೆಟ್ರೋಲ್,ಡಿಸೇಲ್ ದರ ಏರಿಕೆಗೆ, ಸರ್ಕಾರದ ಅನಾವಶ್ಯಕ ಕಾನೂನಿಗೆ, ಅಬಲೆಯಲ್ಲ ಆಕೆ ಸಬಲೆ ಎಂದು ಘೋಷವಾಕ್ಯ ಮೊಳಗಿದರು ಅವರ ಮೇಲಿನ ಶೋಷಣೆಯ ವಿರುದ್ಧ, ಇನ್ನು ಹಲವಾರು ಕಪ್ಪು ಚುಕ್ಕಿಗೆ ಬಣ್ಣ ಬಳಿದವರೇ ಈ ಬಂಡಾಯದ ಹಾಡಿಗೆ ಧ್ವನಿಯಾಗುವರು.
 
     ದಿನೇದಿನೇ ಮಾಧ್ಯಮಗಳಲ್ಲಿ, ಸಾಮಾಜಿಕತಾಣಗಳಲ್ಲಿ ಶೋಷಣೆಯ ರೌದ್ರ ನರ್ತನ,ಅದರ ಅಂತರಾಳದ ಕೂಗು, ಜನಸಾಮಾನ್ಯರ ಅಭಿವ್ಯಕ್ತಿ ಇವೆಲ್ಲ ನೋಡಿ ನೋಡಿ ಪ್ರಸ್ತುತ ವ್ಯವಸ್ತೆಗೆ  ಜೀವನ ಜಿಗುಪ್ಸೆಅನ್ನಿಸುತ್ತಿದೆ. "ಬೋರ್ ಕಲ್ಲಿನ ಮೇಲೆ ಮಳೆ ಸುರಿದರೆ ಏನು ಪ್ರಯೋಜನ" ಎಂಬ ಮಾತಿಗೆ ಇಂದಿನ ಸರ್ಕಾರವೇ ನಿದರ್ಶನದ (ಕಸದ)ತೊಟ್ಟಿಯಾಗಿದೆ. ಆದರು ಪ್ರಯೋಜನದ ಹಾದಿ ಬಗ್ಗೆ ಲಕ್ಷ್ಯ ಇಲ್ಲದಿದ್ದರೂ, ಆರಾಮದ ಬದುಕಿಗೆ ಹಾತೊರೆಯುವ ನಾವು ರಜೆಯ ನೆಪಕ್ಕಾಗಿ "ಬಂದ್"ನ ಬಂಡಾಯಕ್ಕೆ ಧ್ವನಿಗುಡಿಸುತ್ತೇವೆ. ಆದರೆ "ಬಂಡೆಯ ಎದುರು  ಬಂಡಾಯದ ಕರೆ", "ಕೋಣನ ಎದುರು ಕಿನ್ನರಿ ಗಾಯನ" ಎರಡರದ್ದು ಒಂದೇ ಹಾಡು..


      ಅದರ ಮರ್ಮ ಅರಿಯದ ಬುದ್ದಿವಂತ ಜೀವಿಗಳು, ನಾವು ಇಂದಿನ  ಆಲೋಚನ ನಾಂದಿಯ ಯೋಚನೆಯ ಯೋಜನೆಗೆ ಬೆರಗಾಗಬೇಕಾಗಿದೆ??????
                                 ಬದಲಾವಣೆಯ ಹಾದಿ ಹಿಡಿಯಾಬೇಕಾಗಿದೆ!!!

No comments:

Post a Comment