Showing posts with label ಮಕ್ಕಳ ಧ್ವನಿ. Show all posts
Showing posts with label ಮಕ್ಕಳ ಧ್ವನಿ. Show all posts

Sunday, February 22, 2015

ಹಣದುಬ್ಬರ

ಮಾನವನ ಜೀವನ ಮುಳುಗಿದೆ ಹಣದ ಭರದಲ್ಲಿ
ಹಣ ತುಂಬಿ ತುಳುಕುತ್ತಿದೆ ಸಾಗರದ ರಭಸದಲ್ಲಿ
ಸಿರಿವಂತರ ಹಣದ ಬಳಕೆಯ ರೀತಿ
ಇದು ಬಡವರ ಪಾಲಿಗೆ ಬಾಳಿನ ಭೀತಿ
ಹಣವಿದ್ದರೆ ಆಗುವನು ಸಕಲ ಭಾಗ್ಯ ಸತ್ಪಾತ್ರ
ಇಲ್ಲದಿದ್ದರೆ ಹಿಡಿಯುವನು ಚಿಂತೆಯೆಂಬ ದುರ್ಭಗ್ಯದ ಪಾತ್ರ
ವಸ್ತುಗಳ ಬೆಲೆ ಏರಿಕೆ ಹಾರಡುತಿದೆ ಬಾನಾಡಿನಲಿ             
ಬಿಸಿ ಏರುತಿದೆ ಬಡವರ ನರನಾಡಿಗಳಲಿ                        
ಮಾನವನ ಜೀವನಕ್ಕೆ                                      ಅವಶ್ಯವಾಗಿರಬೇಕು ಕಾಂಚನ
 ಹಣ ಇಲ್ಲದೆ ಆಗುವುದು ಅವನ ಬಾಳು ಹರಣ
                                                                      ಜೀವನ ಎಂಬ ಮಂತ್ರ ಅಡಗಿದೆ  ಹಣದಲ್ಲಿ                                                                       
                                                                              ಅದನ್ನು ನಡಿಸಿಕೊಂಡು ಹೋಗುವ ತಂತ್ರ ನಮ್ಮಲಿರಲಿ||
 
ಸೌಮ್ಯ ಜೋಷಿ,
ಇಂಜಿನಿಯರಿಂಗ್ ವಿದ್ಯಾರ್ಥಿನಿ,
ಎಸ್.ಎಲ್.ಏನ್. ಕಾಲೇಜು ,
ರಾಯಚೂರು
                                                                                                  ಕವಯತ್ರಿ

Wednesday, August 6, 2014

ಶೀಘ್ರದಲ್ಲಿ ನಗಾರಿ ನಾದ.....


       ಮನದಾಳದ ತವಕಕ್ಕೆ, ಹಲವು ವರ್ಷಗಳ ಯೋಚನೆಗೆ  ಈಗ ಕೂಡಿದೆ ಸಮಯ, ಹೂಡುತಿದೆ ಯೋಜನೆ. ಅಂತರ್ಜಾಲದಲ್ಲಿ ಕನ್ನಡದ ಸವಿನುಡಿಯ ಸೊಬಗ ಬೆಳಗಿಸಲು, ಉಸಿರನ್ನು ಹಸಿರಾಗಿಸುವ ಚಿಂತನೆಗೆ  “ನಗಾರಿ”ಯ ನಾದದ  ಜೇಂಕಾರ ಇನ್ನೂ ಎರಡೇ ದಿನದಲ್ಲಿ  ಅಂತರ್ಜಾಲವ ಪ್ರವೇಶಿಸಲಿದೆ.
         
        ಮನದಾಳದ ಮಾತಿಗೆ “ಅಂತರಂಗದ ಮೃದಂಗ”, ಬಾಲರ ಚಿಲಿಪಿಲಿ ನಾದಕ್ಕೆ “ಮಕ್ಕಳ ಧ್ವನಿ”, ಸಾಧನೆಯ ಅಭಿವ್ಯಕ್ತಿಗೆ “ಶಿಕಾರಿ”, ಕನ್ನಡದ ಮೊಜಲುಗಳಿಗೆ “ಹೊಂಗಿರಣ”, ಇನ್ನು ಅನೇಕ ಅಂಕಣಗಳನ್ನು  ಹೊತ್ತುಬರುತ್ತಿರುವ ಈ ನಗಾರಿ ನುಡಿಲೋಕಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ....
                          ಶೀಘ್ರದಲ್ಲಿ ನಗಾರಿ ಶ್ರುತಿ ಕೇಳಿಸುವೆ...

       - ಮನಿ